Select Page

ಅಪಾರ್ಥ

ಈ  ಕಥೆಯಲ್ಲಿ.  ಒಬ್ಬ  ವಿಧವೆಯಾದ ಹೆಣ್ಣು ಮಗಳು.         ತನ್ನ , ಕಷ್ಟ  ಕಾಲದಲ್ಲಿ, ತನಗೆ ಪರಿಚಯವಿದ್ದ. ಗಂಡಸಿನಿಂದ.   ಸಹಾಯ ಪಡೆಯುತ್ತಿರುತ್ತಾಳೆ.   ಅದನ್ನ , ನೋಡಿ ಸಹಿಸಲು. ಆಗದ ಅಕ್ಕ ಪಕ್ಕದ ಜನರು.  ಅವರಿಗೆ  ಅಕ್ರಮ ಸಂಬಧವನ್ನ ಕಲ್ಪಿಸಿ. 

 ಕಟ್ಟು ಕಥೆಗಳನ್ನ,   ಹೇಳುತ್ತಾ,   ಅವರ ಸ್ನೇಹ ಸಂಬಧಕ್ಕೆ .   ಅಡ್ಡಿ ಪಡಿಸುತ್ತ  ಚುಚ್ಚು ಮಾತುಗಳನ್ನು ಆಡುತ್ತಾ,                                                                                                                                                                                                                                                                               

    ಅವರಿಗೆ,  ಮನಸಿಗೆ ನೋವು,  ಅವಮಾನಗಳನ್ನ ಮಾಡುತ್ತಾ ಕಾಲ ಕಳೆಯುತ್ತಾರೆ. ಈ ಸಮಾಜದ ,   ಜನಗಳಿಗೆ ತನ್ನ,  ಪರಿಸ್ಥಿತಿಯ ಒತ್ತಡ ಅರ್ಥವಾಗದಿದ್ದಾಗ.  ಮತ್ತು ಬೇರೆ ದಾರಿ ಕಾಣದೆ .

ಆ ಗಂಡಸು,  ಮಾಡಿದ ಸಹಾಯವನ್ನು,  ತಿಳಿಸಿ ಊರಿನ , ಜನರಿಗೆ ,ಅರ್ಥ ಮಾಡಿಸಲು.    ಹೇಗೆ ಪ್ರಯತ್ನ ಮಾಡುತ್ತಾಳೆ . ಮತ್ತು, ಪರಿಸ್ಥಿತಿ , ಅರ್ಥ ಮಾಡಿಸಲು. ಜನರ ಬಳಿ  ಹೋದಾಗ. ಜನರು ಅವರ ಇಷ್ಟಕ್ಕೆ  ತಕ್ಕಂತೆ . ಹೇಗೆ ಅರ್ಥಯೈಸಿಕೊಂಡರು . ಮತ್ತು ,  ಇಂತಹ ಜನರ, ಮುಂದೆ, ಆ ಹೆಣ್ಣು ಹೇಗೆ ಬದುಕಿದಳು.  ಎಂಬುದೇ ಈ ಕಥೆಯ ಸಾರಾಂಶ .                                                                                                                                                                                                                                                                                                                                                                                                                                     ಮಂಜುಳಾಗೆ ಆಗಿನ ಕಾಲದಲ್ಲಿ , ಚಿಕ್ಕ ವಯಸ್ಸಿನಲ್ಲಿಯೇ, ಮದುವೆ ಮಾಡಿ ಬಿಡುತ್ತಾರೆ. ಹಿಂದೇಯೆ ಎರಡು ಮಕ್ಕಳು ಕೂಡ ಆಗಿಬಿಡುತ್ತಾರೆ.   ಹೇಗೊ ಅವರನ್ನ, ದೊಡ್ಡವರನ್ನಾಗಿ  ಮದುವೆ .ಮಾಡೋ ಹೊತ್ತಿಗೆ ಗಂಡ ಕೂಡ ಸಾವನ್ನಪ್ಪಿದರು.                                                                                                                                                                                                                                                                                                                      ತನ್ನ ಎರಡು ಮಕ್ಕಳನ್ನು ಮದುವೆ ಮಾಡಿ.  ಅವರು ಅಮ್ಮನನ್ನು.  ಬಿಟ್ಟು ಬೇರೆ ಬೇರೆ ಊರುಗಳಲ್ಲಿ ಇದ್ದರು .  ಹೀಗೆ ಒಂಟಿ ಜೀವನ ನಡೆಸುತ್ತಿದ್ದ ಮಂಜುಳಾ ,  ತನ್ನ ಹೊಟ್ಟೆ ಪಾಡಿಗಾಗಿ ನಾಲ್ಕೈದು ಮನೆಯ, ಮುಸುರೆ ತಿಕ್ಕಿ .ಬಂದ ಹಣದಿಂದ. ಜೀವನ  ಸಾಗಿಸುತ್ತ.   ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಳು.

       ಮಂಜುಳಾಗೆ,  ಒಂದು ದಿನ,  ಅನಾರೋಗ್ಯ ಸಮಸ್ಯೆಯಾಯಿತು. ಅವಳನ್ನ ಆಸ್ಪತ್ರೆಗೆ , ಸೇರಿಸಲು ಮತ್ತು ಹಾರೈಕೆ ಮಾಡಲು.  ಮಕ್ಕಳು,  ಅಥವಾ ಸಂಬಧಿಕರು ಯಾರು ಬರಲಿಲ್ಲ.  ಅವರವರ,  ಜೀವನದ ಜಂಜಾಟವೇ ಸಾಕಾಗಿದೆ. ಎಂದು ನೋಡಲು ಸಹ  ಬಾರದೇ ಹೋದರು.

ಆ ಸಮಯದಲ್ಲಿ,  ಮಂಜುಳಾ  ನೆರವಿಗೆ ಸಹಾಯಕ್ಕೆ ಬಂದದ್ದು. ಒಬ್ಬನೇ ಒಬ್ಬ ವ್ಯಕ್ತಿ . ಅದು ಮಂಜುಳಾಗೂ , ಅವನ ಯಾರು,  ಏನು ಯಾತ್ತಾ ಎಂದು ಗೊತ್ತಿರಲಿಲ್ಲ. ತನ್ನ ಕಷ್ಟ ಕಾಲದಲ್ಲಿ,  ಹೆತ್ತ ಮಕ್ಕಳು,  ಮತ್ತು ರಕ್ತ ಸಂಬಂಧಿಕರಗಳು, ಎಂದು ಕರೆಸಿಕೊಳ್ಳುವ.

ಜನರು .ತನ್ನ , ಅನಾರೋಗ್ಯದ ಸಮಯದಲ್ಲಿ. ಯಾರೊಬ್ಬರೂ. ಮಂಜುಳಾಳನ್ನ ಬಂದು,  ನೋಡದೆ ಇದ್ದಾಗ,  ಹಿಂದೆ ಮುಂದೆ ಗೊತ್ತಿಲ್ಲದ .ವ್ಯಕ್ತಿ ಅವಳನ್ನ ನೋಡಿಕೊಂಡಿದ್ದು .ತುಂಬಾ ಮಹತ್ವದ ಕಾರ್ಯವಾಗಿತ್ತು.

 

next

    ತನ್ನ ಕಷ್ಟದಲ್ಲಿ,  ಕೈ ಹಿಡಿದ ಆ ವ್ಯಕ್ತಿ  ಧನಂಜಯ.,  ಅವನಿಗೆ ,ಚಿರ ಋಣಿಯಾಗಿರಲು ಬಯಸಿದ. ಮಂಜುಳಾ,. ಧನಂಜಯನ, ಜೊತೆ ಸ್ನೇಹ ಬೆಳೆಸಿಕೊಂಡಳು. ಅವರ ಸ್ನೇಹ,  ತುಂಬಾ ಗಾಢವಾಗಿ ಬೆಳೆಯಿತು.

ಎಷ್ಟರ ಮಟ್ಟಿಗೆ,  ಎಂದರೆ ಮಂಜುಳಾಗೆ . ಏನು ಸಮ್ಯಸೆ , ತೊಂದರೆ ಬಂದರು. ,ಯ  ಸಹಾಯ ಮಾಡಲು .ಧನಂಜಯ, ಮೊದಲ ಸಾಲಿನಲ್ಲಿ, ನಿಲ್ಲುತ್ತಿದ್ದ.

    ಇವರ ,ಸ್ನೇಹ ಸಂಬಂಧಕ್ಕೆ. ಮಂಜುಳಳಾ ಮಕ್ಕಳು , ಅಡ್ಡಿಪಡಿಸಲಿಲ್ಲ.

 ಆದರೆ ,ಸಂಬಧಿಕರು ದೂರವಾದರೂ. ಹಾಗೇಯೆ ಯಾವುದೇ,

 ಅಧಿಕಾರ ಮತ್ತು ಹಕ್ಕು ಇಲ್ಲದ. ಸಮಾಜ ಮತ್ತು ಸಮಾಜದಲ್ಲಿ ಇರುವ ಜನಗಳು .ಇವರ ಸಂಬಂಧಕ್ಕೆ .ಕೆಟ್ಟ ಅರ್ಥವನ್ನ ಕಲ್ಪಸಿ.   ಬಾಯಿಗೆ ಬಂದ ಹಾಗೆ,  ಮಾತಾನಾಡಿ .ಅವರ ಮನಸ್ಸನ್ನ ನೋವು ಮಾಡುತ್ತಿದ್ದರು.

     ಮಂಜುಳಾಗೆ ,  ಅನಾರೋಗ್ಯದ ಸಮಸ್ಯೆ ಜಾಸ್ತಿ ಆಗಿ.  ಅವಳು ಕೆವಸವನ್ನೆ ಬೀಡಬೇಕಾದ ,  ಸಂಧರ್ಭ ಎದುರಾಯಿತು. ಆ ಸಮಯದಲ್ಲಿ  , ಅವಳಿಗೆ,  ತಾನು  ವಾಸವಿದ್ದ .ಬಾಡಿಗೆ ಮನೆಯ  ಬಾಡಿಗೆಯನ್ನು ಕಟ್ಟಲು.

 

ಮತ್ತು , ತನ್ನ  ಚಿಕ್ಸಿತೆಗೂ ಹಣವಿಲ್ಲದೇ,  ಊಟಕ್ಕೂ ಕಷ್ಟ ಪಡುತ್ತಿದ್ದಳು.   ಯಾರ ಬಳಿಯೂ , ಸಹಾಯ ಕೇಳದೇ, ತುಂಬಾ ಕಷ್ಟ  ಪಡುತ್ತಿದ್ದಳು. ಇದೋ ಹೇಗೊ ಧನಂಜಯಾಗೆ , ತಿಳಿದು . ಮಂಜುಳಾಳ,  ಸಹಾಯಕ್ಕಾಗಿ ಮತ್ತೇ   ಬಂದ.

    ಮಾನವೀಯತೆಯ,  ದೃಷ್ಟಿಯಿಂದ .ಮಂಜಳಾಗೆ ಸಹಾಯ   ಮಾಡಲು. ಆಸರೆಯಾಗಿ ಇರಲು , ಆಶ್ರಯ ನೀಡಲು  ಧನಂಜಯ, ಮುಂದಾದನು.    ಧನಂಜಯ್ ದಿನ,  ಮಂಜುಳ ಮನೆಗೆ ಬಂದು ಹೋಗುತ್ತಿದ್ದನು.

 

 ಅದನ್ನು , ನೋಡುತ್ತಿದ್ದ ಅಕ್ಕ ಪಕ್ಕದ , ಈ ಜನರು,  ಒಂದೊಂದು, ತರ ಮಾತಾನಾಡುತ್ತಿದ್ದರು. ಅವರ ಸಂಬಧವನ್ನ , ಟೀಕಿಸುತ್ತಾ,  ಹೀಯಾಳಿಸುತ್ತಾ. ಕೇಕೆ ಹಾಕಿ ನಗುತ್ತಾ. ಹಿಂದೆ ಮುಂದೆ ,ಮಾತಾಡುತ್ತಿದ್ದರು.

 ಮಂಜುಳಾ,   ಎಷ್ಟೋ ಬಾರಿ . ತನ್ನ ಕಷ್ಟದ ದಿನಗಳು.  ಮತ್ತು ಪರಿಸ್ಥಿತಿ ಯನ್ನ.    ಧನಂಜಯ್ ಮತ್ತು ಅವಳ ಸ್ನೇಹ ಸಂಬಂಧವನ್ನು.  ಸಮಾಜದ  ಜನರ, ಎದುರಿಗೆ  ತೆರೆದಿಡಲು.

ಅರ್ಥ ಮಾಡಿಸಲು. ಪ್ರಯತ್ನಿಸಿದಳು .ಅದರೆ ಕೆಟ್ಟ ಮನಸಿನ,  ಆ ಜನರು  . ಅವರ, ಹಿತ್ತಾಳೆಯ ಕಿವಿಯನ್ನ ಕೊಟ್ಟು. ಕೇಳಲೇ  ಇಲ್ಲ. ಬದಲಿಗೆ ,  ಅವರೇ, ಕಲ್ಪಿಸಿಕೊಂಡು, ಕಥೆಯನ್ನ,  ಅವರದೇ ಆದ ಶೈಲಿಯಲ್ಲಿ .ಮತ್ತೆ, ಮಾತಾಡಲು ಪಾರ್ರಂಭಿಸಿದರು.

  ಮೊದಲೇ , ಕಷ್ಟ ಸುಖದ ಬಗ್ಗೆ ಚನ್ನಾಗಿ   ತಿಳಿದಿದ್ದ. ಮಂಜುಳಾ.  ಈ ಕೆಟ್ಟ ಜನರ,  ಹೀನಾಯ ಮನಸ್ಥಿತಿ ಬಗ್ಗೆ ಚನ್ನಾಗಿ  ಅರಿತಿದ್ದಳು.

 

  ಆದರಿಂದ, ಅವಳ ಮತ್ತು ಧನಂಜಯ್, ಸ್ನೇಹ ಸಂಬಂಧವನ್ನ . ಈ ಜನಗಳಿಗೆ,  ಸಾಬೀತು ಪಡಿಸುವುದರಿಂದ. ಯಾವುದೇ ಪ್ರಯೋಜನವು ಇಲ್ಲ . ಎಂದು ನಿರ್ಧರಿಸಿದಳು .

       ಅದನ್ನು,    ಈ ಸಮಾಜಕ್ಕೆ  ಮತ್ತು ಸಮಾಜದ ಜನರುಗಳಿಗೆ .     ಹೇಳಿ  ಸಾಬೀತು,  ಪಡಿಸುವ  ಯಾವ, ಅವ್ಯಶಕತೆಯು ಇಲ್ಲ .ಎಂದು ತಿಳಿದು.

 ಮತ್ತು ನನ್ನ ಧನಂಜಯ್  ನ,  ಸ್ನೇಹ ಸಂಬಂಧ ಏನೆಂದು ನಮ್ಮ ಮನಸಿಗೆ ತಿಳಿದಿದೆ. ಮತ್ತು ಅರ್ಥವಾಗಿದೆ. ಎಂದುಕೊಂಡು ಅವಳ ಮುಂದಿನ ಜೀವನವನ್ನ  ಸಾಗಿಸಲು ಮುಂದಾದಳು