ಎರಡು ದೋಣಿ
ಎರಡು ದೋಣಿ
. ಈ ಕಥೆಯಲ್ಲಿ, ಒಬ್ಬ ಹುಡುಗ, ಓದುವ, ಸಮಯದಲ್ಲಿ, ಒಂದು, ಹುಡುಗಿಯನ್ನ , ಪ್ರೀತಿ, ಮಾಡಿ, ಅವರಿಬ್ಬರೂ, ಕೆಲಸಕ್ಕೆ, ಸೇರಿದ ನಂತರ. ಒಂದೇ ಮನೆಯಲ್ಲಿ, ಲಿವಿಂಗ್ ಟೂ ಗೇದರ್ , ಸಂಬಂಧವನ್ನ, ಮುಂದುವರೆಸಿಕೊಂಡು,
ಮತ್ತು ಆಚೆ ನೋಡುವ, ಜನಗಳಿಗೆ, ಮತ್ತು ಹೊಸದಾಗಿ, ಸ್ನೇಹಿತರಾದವರಿಗೆ, ಅಣ್ಣ ತಂಗಿ ಅಂತ, ಪರಿಚಯ, ಮಾಡಿಕೊಳ್ಳುತ್ತಾರೆ.
ಮತ್ತು ಆ ಹುಡುಗ, ತಾನು, ಲಿವಿಂಗ್, ಟೂ ಗೇದರ್ ಸಂಬಂಧಲ್ಲಿ ಇದ್ದ ಹುಡುಗಿಯ, ಗೆಳತಿಗೇ ಕೂಡ, ಪ್ರೀತಿ, ನೀವೆದನೆ, ಮಾಡುತ್ತಾನೆ. ಇದರಿಂದ ಒಬ್ಬ, ಹುಡುಗ , ಇಬ್ಬರೂ, ಹುಡುಗಿಯರು,
ಪ್ರೀತಿ ಕಥೆಯ, ಜೀವನದಲ್ಲಿ ಏನೆಲ್ಲಾ, ಸಮಸ್ಯಗಳನ್ನೆಲ್ಲಾ. ಎದುರಿಸಿದರು, ಎಂಬುದು, ಈ ಕಥೆಯ ಸಾರಾಂಶವಾಗಿದೆ.
ರೋಹನ್ ಮತ್ತು ಮುತ್ತಮ್ಮ , , ಜೊತೆಯಲ್ಲಿ, ಓದುತ್ತಿರುವಾಗಲೇ, ಪ್ರೇಮಿಗಳು. ಒಬ್ಬರನೊಬ್ಬರು ತುಂಬಾ ಪ್ರೀತಿ ಮಾಡುತ್ತಿದ್ದರು. ಓದು, ಮುಗಿದ, ನಂತರ, ಉದ್ಯೋಗವನ್ನ, ಆರಿಸಿ, ಪಕ್ಕದ, ಪಟ್ಟಣಕ್ಕೆ ಬಂದು ನೆಲೆಸಿದರು.
ಇಬ್ಬರೂ ಒಂದು, ಬಾಡಿಗೆ ಮನೆಯನ್ನ, ಮಾಡಿ, ಆ ಓನರ್ ಗೆ, ಅಣ್ಣ ತಂಗಿ ಎಂದು, ಪರಿಚಯ, ಮಾಡಿಕೊಂಡಿದ್ದರು. ಅವರ ಊರಿನ, ಸ್ನೇಹಿತರಿಗೆ, ಬಿಟ್ಟು, ಬೇರೆಯಾರಿಗೂ. ಗೊತ್ತಿರಲಿಲ್ಲ.
ಮುತ್ತಮ್ಮ, ಕೆಲಸ, ಮಾಡುತ್ತಿದ್ದ, ಆಪೀಸ್ ನಲ್ಲಿ, ಒಬ್ಬ, ಮುದ್ದಾದ, ಶ್ರೀಮಂತರ, ಹುಡುಗಿ, ಕೆಲಸ ಮಾಡುತ್ತಿದ್ದಳು ,ಅವಳ ಹೆಸರು ಶ್ರಾವ್ಯ . ಮುತ್ತಮ್ಮ ನ ಜೊತೆ, ಇನ್ನಿಬ್ಬರು, ಸ್ನೇಹಿತೆಯರು, ಇದ್ದರು.
ಒಟ್ಟು, ಆ ಮೂರು, ಜನ, ಒಂದೇ, ಊರಿನವರು. ಒಟ್ಟಿಗೆ, ಓದಿದವರು.ಒಟ್ಟಿಗೆ, ಕೆಲಸ, ಮಾಡುತ್ತಿದ್ದರು. ಇವರ ಗುಂಪಿಗೆ , ಶ್ರಾವ್ಯಳನ್ನ ,ಕೂಡ, ಗೆಳತಿಯಾಗಿ, ಸೇರಿಸಿಕೊಂಡರು, ಶ್ರಾವ್ಯ, ಶ್ರೀಮಂತ ಮನೆತನದ, ಹೆಣ್ಣು ಮಗಳು.
ನೋಡಲು ಸುಂದರಿ.
ಸ್ನೇಹ , ಪ್ರೀತಿ ವಿಶ್ವಾಸ ಕ್ಕೆ ಪ್ರಾಮುಖ್ಯತೆ, ಕೊಡುವಂತಹವಳು. ನೀತಿ, ನಿಯತ್ತು ನಂಬಿಕೆಗೆ , ಸದಾ ಅರ್ಹಳಾಗಿದ್ದಳು . ಹೀಗಿರುವಾಗ,. ಪ್ರತಿ , ವಲಯದಲ್ಲೂ , ಶ್ರಾವ್ಯಳನ್ನ, ಹುಡುಗ ,ಹುಡುಗಿಯರು , ಸುತ್ತುವರೆದು , ತಾವಾಗೀಯೆ , ಗೆಳತನ ಬಯಸಿ ಬರುತ್ತಿದ್ದರು .
ಮುತ್ತಮ್ಮ, ಮತ್ತು ಅವಳ ಗೆಳತಿಯರು. ಸೇರಿ , ಶ್ರಾವ್ಯಳ ಸ್ನೇಹದ , ಹಸ್ತ ಚಾಚಿದರು. ಶ್ರಾವ್ಯ, ಕೂಡ ಸ್ನೇಹಜೀವಿ . ಎಲ್ಲಾರ, ಸ್ನೇಹವನ್ನು, ತುಂಬು ಹೃದಯದಿಂದ ಸ್ವೀಕರಿಸುತ್ತಿದ್ದಳು.
ಹೀಗೆ ಶ್ರಾವ್ಯ ಳ ಸ್ನೇಹ ಎಲ್ಲಾರನ್ನು, ಸೆಳೆಯುತಿತ್ತು. ಒಂದು , ದಿನ ತುಂಬಾ, ಆಸೆಯಿಂದ , ಮುತ್ತಮ್ಮ ಮತ್ತು ಇನ್ನಿಬ್ಬರು ಗೆಳತಿಯರು , ಅವರು ವಾಸಿಸುತ್ತಿದ್ದ, ರೂಮಿಗೆ, ಶ್ರಾವ್ಯಳನ್ನ , ಕರೆದುಕೊಂಡು, ಹೋಗಬೇಕೆಂದು ಅಂದುಕೊಂಡರು.
ಅವರ , ಆಸೆಯಂತಯೇ.ಶ್ರಾವ್ಯಳನ್ನ, ಅವರ ರೂಮಿಗೆ, ಕರೆದುಕೊಂಡು ಹೋದರು. ಆಗ, ಮುತ್ತಮ್ಮ , ನ ರೂಮಿನಲ್ಲಿ, ಅವಳನ್ನ , ಪ್ರೀತಿ ಮಾಡುತ್ತಿದ್ದ,
ಹುಡುಗ ರೋಹನ್ , ಕೂಡ, ಇದ್ದನು. ಮುತ್ತಮ್ಮ , ರೋಹನ್ ನನ್ನ , ತನ್ನ cousin brother ಎಂದು ಪರಿಚಯ, ಮಾಡಿಸಿದಳು.
ಶ್ರಾವ್ಯ, ಕೂಡ, ಅವನಿಗೆ, ಹಾಯ್, ಹೇಳಿದಳು. ಆ ನಂತರ, ಮುತ್ತಮ್ಮ ಮತ್ತು ಅವಳ, ಗೆಳತಿಯರು, ಶ್ರಾವ್ಯಳ, ಜೊತೆ, ತುಂಬಾ ಹತ್ತಿರದ ಸ್ನೇಹಿತರಾದರು.
ಮತ್ತು ತನ್ನ, ಅಕ್ಕ ಪಕ್ಕದಲ್ಲಿ, ಇರುವ, ಸ್ನೇಹಿತರಿಗೆ. ಹಣವನ್ನ, ಚನ್ನಾಗಿ, ಖರ್ಚು ಮಾಡುತ್ತಿದ್ದಳು. ಇದೆಲ್ಲವೂ, ಅವಳನ್ನ, ಆಕರ್ಷಿಸುವಂತೆ, ಮಾಡುತ್ತಿತ್ತು. ಹೀಗೆ, ಪ್ರತಿಯೊಬ್ಬರೂ, ಶ್ರಾವ್ಯಳನ್ನ ನೋಡಿ, ಆಕರ್ಷಿತರಾಗುತ್ತಿದ್ದರು.
ರೋಹನ್ ಕಣ್ಣು, ಶ್ರಾವ್ಯಳ ಮೇಲೆ, ಬಿತ್ತು. ಶ್ರಾವ್ಯಳ, ಪೋನ್ ನಂ ನ್ನ. ಅವಳ, ಪ್ರೇಯಸಿ ಮುತ್ತಮ್ಮ ನ್ನ, ಪೋನಿನಲ್ಲಿ, ಕಳ್ಳತನ, ಮಾಡಿ ತೆಗೆದುಕೊಂಡ.
ಹೇಗೊ, ಕದ್ದು ಪೋನ್ ನಂಬರ್ , ತೆಗೆದುಕೊಂಡ , ರೋಹನ್, ಶ್ರಾವ್ಯ ಳಿಗೆ , ಮೊದಲು, ಪೋನಿನಲ್ಲಿ, ಸಂದೇಶಗಳನ್ನ, ಕಳುಹಿಸುತ್ತಿದ್ದ.
ಮತ್ತು ತಾನು ಮುತ್ತಮ್ಮನ , ಅಣ್ಣ ರೋಹನ್, ನಮ್ಮ ರೂಮಿಗೆ ಬಂದಾಗ, ಪರಿಚಯ, ಮಾಡಿಕೊಟ್ಟಳಲ್ಲ ನನ್ನ ತಂಗಿ ಎಂದು ಹೇಳುತ್ತಾ, ಪೋನಿನಲ್ಲಿ , ಪುನಃಹ ಅವನ, ಪರಿಚಯವನ್ನು, ಮಾಡಿಕೊಂಡು..
ಶ್ರಾವ್ಯ ನನ್ನ ಪೋನ್ ನಂಬರ್ , ನಿಮಗೆ ಹೇಗೆ, ಸಿಕ್ಕಿತು ಎಂದು ಕೇಳಿದಳು. ಆಗ ರೋಹನ್, ತಾನು ಯಾವ ರೀತಿ, ಪೋನ್ ನಂ ಕದ್ದು ತೆಗೆದುಕೊಂಡೆ ಎಂದು ವಿವರಿಸಿದ.
ಅದಕ್ಕೆ ಶ್ರಾವ್ಯ, ಕದ್ದು ಯಾಕೆ, ತಗೊಂಡೀರಿ, ನಿಮ್ಮ ತಂಗಿ ಮುತ್ತಮ್ಮ ನನ್ನ, ಕೇಳಿಯೇ, ತೆಗೆದುಕೊಳ್ಳ, ಬಹುದಿತ್ತಲ್ಲವೇ. ಎಂದು ಕೇಳಿದಳು.
ರೋಹನ್, ಮನಸಿನಲ್ಲಿ , ನಾವು ಅಣ್ಣ ತಂಗಿ ಎನ್ನುವುದೇ ಸುಳ್ಳು. ಮುತ್ತಮ್ಮ ಪ್ರೀತಿ , ಮಾಡುತ್ತಿರುವ , ಹುಡುಗ ನಾನೇ . ಹೀಗಿರುವಾಗ, ನನ್ನ , ಲವರ್ , ಬಳಿ, ಅವಳ ಗೆಳತಿ, ಪೋನ್, ನಂಬರನ್ನ, ಕೇಳಿದರೆ,
ಯಾವ , ಹುಡುಗಿ , ಕೊಡುತ್ತಾಳೆ, ಹೇಳು ಎಂದು ಮನಸಿನಲ್ಲಿ ಮೇ ಅಂದುಕೊಂಡನು.
ಮತ್ತು ಬೈಯುತ್ತಾಳೆ. ಆದರಿಂದ ಅವಳಿಂದ , ಪೋನ್ ನಂಬರ್ , ಕಳ್ಳತನ ಮಾಡಿ ತೆಗೆದುಕೊಂಡೆ. ಎಂದು ಹೇಳಿದನು. ಮುಂದುವರಿದು ಶ್ರಾವ್ಯ.
ನನ್ನ ಪೋನ್. ನಂ , ಕದ್ದು ತೆಗೆದುಕೊಂಡು , ಪೋನ್ ಕರೆ, ಸಂದೇಶ , ಕಳುಹಿಸಲು , ಕಾರಣ ಏನು ಎಂದು , ಕೇಳಿದಳು.ಅದಕ್ಕೆ ರೋಹನ್, ನಿಮ್ಮ ಗೆಳತನ ಬೆಳೆಸಲು ಎಂದು ಹೇಳಿದನು.
ಮತ್ತೆ ಶ್ರಾವ್ಯ, ನನ್ನ ಗೆಳತನವನ್ನೆ, ಬೆಳೆಸಬೇಕು, ಎಂದು ಏಕೆ ಅನಿಸಿತು ಎಂದು ಕೇಳಿದಳು. ರೋಹನ್ ನೀವು ತುಂಬಾ ಒಳ್ಳೆಯ ಹುಡುಗಿ ಅಂತ ಅನಿಸಿತು.
ಮತ್ತು ನಿಮ್ಮ ಬಗ್ಗೆ , ನನ್ನ ತಂಗಿ ಮತ್ತು ಅವಳ ಗೆಳತಿಯರು ತುಂಬಾ , ಒಳ್ಳೆಯ ಮಾತುಗಳನ್ನ, ಆಡುತ್ತಿದ್ದರು. ಮತ್ತು ನಿಮ್ಮ ನನ್ನು, ತುಂಬಾ ಹೊಗಳುತ್ತಿದ್ದರು .
ಹಾಗೇ, ನಿಮ್ಮ , ಸ್ನೇಹ , ಸಂಪಾದಿಸುವ , ಆಸೆ ಮತ್ತು ಆಸಕ್ತಿ. ನನ್ನಲಿ ಬೆಳೆಯಿತು. ಆದರಿಂದ , ನಿಮ್ಮ ಗೆಳತನ, ಬಯಸಿ ಬಂದೆ. ನನ್ನ ಈ ಗೆಳತನವನ್ನ , ಸ್ವೀಕರಿಸುವೀರಾ. ಪ್ರೀತಿಯ ಗೆಳತಿಯೇ ಎಂದು ಕೇಳಿದನು.
ಶ್ರಾವ್ಯ ಕೂಡ , ರೋಹನ್ ಗೆಳೆತನವನ್ನ ಸರಿ ಎಂದು ಸ್ವೀಕರಿಸಿದಳು. ಶ್ರಾವ್ಯ ಸ್ನೇಹವನ್ನ , ಒಪ್ಪಿಕೊಂಡ ನಂತರ. ರೋಹನ್ , ಪೋನ್ ಮತ್ತು ಸಂದೇಶಗಳನ್ನ ತಪ್ಪದೇ ಕಳುಹಿಸುತ್ತಿದ್ದನು.
ಎಷ್ಟರ, ಮಟ್ಟಿಗೆ ಎಂದರೆ , ಶ್ರಾವ್ಯ ಕೂಡ ಇವನನ್ನ ತುಂಬಾ , ಅಚ್ಚಿಕೊಂಡಿದ್ದಳು. ಇವನ ಜೊತೆ, ಮಾತಾಡದೇ , ಸಂದೇಶ ಕಳುಹಿಸದೇ , ಒಂದು ದಿನ ಸಹ ಇರುತ್ತಿರಲಿಲ್ಲ . ಆ ಒಂದು ಹಂತಕ್ಕೆ ಇವರ ಸ್ನೇಹ ಗಟ್ಟಿಯಾಗಿತ್ತು .
ಅವಳು ಮನೆಯಲ್ಲಿ , ಯಾವುದೇ , ಕಷ್ಟ ನಷ್ಟ ಗಳಿಲ್ಲ. ಬದಲಿಗೆ, ಅವಳಿಗೆ , ಮನೆಯ, ಯಾವುದೇ , ಜವಾಬ್ದಾರಿಗಳಿಲ್ಲ. ಅವಳ ಜೀವನದಲ್ಲಿ ಆರಾಮಾಗಿ ಇದಾಳೆ ಎಂದು ತಿಳಿದುಕೊಳ್ಳುತ್ತಾನೆ.
ಶ್ರಾವ್ಯ ಗೆ, ಸ್ನೇಹಿತನಾಗಿದ್ದ , ರೋಹನ್ , ತನ್ನ, ಹಿನ್ನೆಲೆ ಬಗ್ಗೆ ಹೇಳಿಕೊಳ್ಳುತ್ತಾನೆ , ನಾನು ಬಡ ಕುಟುಂಬದವನು.
ನನ್ನ ತಂದೆ ಇದಾರೆ , ಆದರೆ ನಮ್ಮ ಮನೆಯ. ಯಾವ ಜವಾಬ್ದಾರಿಗಳನ್ನು. ಹೊತ್ತು ಕೊಂಡಿಲ್ಲ. ಇಷ್ಟು ದಿನ , ನಮ್ಮ ತಾಯಿ , ನನ್ನನ ಮತ್ತು ನನ್ನ ತಂಗಿಯನ್ನ, ಕಷ್ಟ ಪಟ್ಟು , ಸಾಕಿ. ಬೆಳಸಿ. ಓದಿಸಿದರು.
ನಾನು, ಕೆಲಸಕ್ಕೆ ಸೇರಿದ ಮೇಲೆ , ನಮ್ಮ ತಾಯಿಯನ್ನ ಕೆಲಸ ಮಾಡುವುದನ್ನ ತಪ್ಪಿಸಿದೆ ಮತ್ತು ನನ್ನ ತಂಗಿಗೆ , ಮದುವೆ ಮಾಡಿದೆವು.ನನ್ನ , ತಂಗಿ ಮದುವೆ ಸಾಲ ಮತ್ತು , ನನ್ನ ಓದಿಗೆ ಮಾಡಿದ ಸಾಲ , ಎರಡು ನನ್ನ ಹೆಗಲ ಮೇಲೆ ಇದೆ .
ಆದರಿಂದ , ಕೆಲಸದ ಜೊತೆಗೆ , ಹೆಚ್ಚುವರಿ ಕೆಲಸವನ್ನ ಕೂಡ ಮಾಡುತ್ತೆನೆ ಎಂದು ಹೇಳಿಕೊಂಡನು. ಶ್ರಾವ್ಯಳಿಗೆ, ಅವನನ್ನ ನೋಡಿ ಅಯ್ಯೋ ಪಾಪ ಅನಿಸಿತು .
ಶ್ರಾವ್ಯ ಳ ಊರು ಬೇರೆ , ರೋಹನ್ ನ ಊರು ಕೂಡ ಬೇರೆ . ಆದರೆ ಶ್ರಾವ್ಯ ಯಾರೇ ಏನೇ ಹೇಳಿದರೂ ನಂಬಿ ಬಿಡುತ್ತಿದ್ದಳು. ಅವರ ಹಿನ್ನೆಲೆಯನ್ನು , ಕೆದಕಿ ಕೇಳುತ್ತಿರಲಿಲ್ಲ , ನೋಡುತ್ತಿರಲಿಲ್ಲ .
ಈ ರೋಹನ್ , ಯಾವಾಗಲೂ , ಶ್ರಾವ್ಯ ಳ,ಬಳಿ ಪಾಪದ ಹುಡುಗನ, ಹಾಗೆ ನಡೆದುಕೊಳ್ಳುತ್ತಿದ್ದನು. ಆಗಾಗ್ಗೆ , ನನಗೆ , ದುಡ್ಡಿನ , ಸಮಸ್ಯೆ ಅಂತ ಹೇಳಿ , ಶ್ರಾವ್ಯಳಿಂದ ಹಣವನ್ನ ಪಡೆಯುತ್ತಿದ್ದ. ಶ್ರಾವ್ಯ ,
ಅವನನ್ನ ನೋಡಿ , ಅಯ್ಯೋ ಪಾಪ ಎಂದು , ಹಿಂದು ಮುಂದು ನೋಡದೆ , ಕೇಳಿದಾಗಲೆಲ್ಲಾ , ಹಣವನ್ನ ಕೊಡುತ್ತಿದ್ದಳು. ಹಿಂತಿರುಗಿ , ಅವನ ಬಳಿ , ಕೊಟ್ಟ ಹಣವನ್ನ ವಾಪಸ್ ಕೇಳುತ್ತಿರಲಿಲ್ಲ .
ತನಗೇ , ಸಿಗುತ್ತಿದ್ದ ಸಮಯವೆನೆಲ್ಲಾ , ಶ್ರಾವ್ಯಳ ಜೊತೆಯೇ ಕಳೆಯುತ್ತಿದ್ದ. ನಿಧಾನವಾಗಿ , ರೋಹನ್ , ಶ್ರಾವ್ಯಳನ್ನ ತುಂಬಾ ಅಚ್ಚಿಕೊಂಡಿದ್ದನು. ಮತ್ತು ಪ್ರೀತಿಸಲು ಸಹ ಸುರುಮಾಡಿ ಬಿಟ್ಟಿದ್ದನು.
ಶ್ರಾವ್ಯ, ರೋಹನ್ ಗೆ, ಸ್ನೇಹಿತ ಅಂತ ಸಲುಗೆಯಿಂದ, ಭೇಟಿಯಾಗುವುದು. ಹೊರಗಡೆ ಸುತ್ತಾಡುವುದು. ಮತ್ತು ಹೋಟೆಲ್ ಗೆ,ಹೋಗುವುದು ಶಾಪಿಂಗ್ ಮಾಡೋದು. ರೋಹನ್ ಗೆ ಬೇಕಾದ , ಬಟ್ಟೆ, ಶೂ, ಎಲ್ಲಾವನ್ನು ಉಡುಗೊರೆಯಾಗಿ ನೀಡುತ್ತಿದ್ದಳು.
ನಾವು ಚಿಕ್ಕ ವಯಸ್ಸಿನಲ್ಲಿ , ಏನು ತಿಳಿಯದೇ ಪ್ರೀತಿ ಮಾಡಿಬಿಟ್ಟಿವೀ, ಅಂತ , ಭವಿಷ್ಯದಲ್ಲಿ ನಾವಿಬ್ಬರೂ ಮದುವೆ ಆದರೆ , ಇಬ್ಬರು ಸುಖವಾಗಿ ಇರೋಕೆ ಆಗಲ್ಲ.
ಮತ್ತು ಹೀಗಿರೊ , ಸಂಧರ್ಭದಲ್ಲಿ , ನನ್ನ ಮನಸಿನ ತುಂಬಾ ಶ್ರಾವ್ಯನೇ , ಇದಾಳೆ . ಮತ್ತು ನನಗೆ , ಗೊತ್ತಿಲ್ಲದೇ , ಮುತ್ತಮ್ಮ ಳ, ಪ್ರೀತಿ ಮರೆತು ಹೋಗಿ .
ಶ್ರಾವ್ಯ ಳನ್ನ ಪ್ರೀತಿ ಮಾಡತಾ ಇದೀನಿ. ನಾನು ಪ್ರೀತಿ ಮಾಡತೀರೊ ವಿಷಯನ, ಹೇಗಾದರೂ, ಶ್ರಾವ್ಯ ಳ ಬಳಿ ಹೇಳಿ. ಅವಳು ನನ್ನನ್ನು ಪ್ರೀತಿಸುವಂತೆ ಮಾಡಬೇಕು.
ನಾನು ಅಂದುಕೊಂಡತೆ, ಆಗಿಬಿಟ್ಟಿರೆ , ನಾನು ಜೀವನದಲ್ಲಿ ಸೆಟಲ್ ಆಗಬಹುದು . ಅದರಲ್ಲೂ ಶ್ರೀಮಂತ ಮನೆಯ ಹೆಣ್ಣು ಮಗಳು. ಮತ್ತೆ ಶ್ರಾವ್ಯ , ಒಳ್ಳೆ ಗುಣವಂತೆ , ರೂಪವಂತೆ , ವಿದ್ಯಾವಂತೆ,
ಅವಳ ಜೊತೆ , ಸಂತೋಷವಾಗಿ ಜೀವನ ಸಾಗಿಸಬಹುದು, ಎಂದು ಆಸೆ ಪಡುತ್ತಿದ್ದನು. ಆದರಿಂದ ಹೇಗಾದರೂ ಬೇಗ, ನನ್ನ ಪ್ರೀತಿಯನ್ನ , ಶ್ರಾವ್ಯ ಳ ಬಳಿ ಹೇಳಿಬಿಡಬೇಕೆಂದು, ಅವಕಾಶಕ್ಕಾಗಿ ಕಾಯುತ್ತಿದ್ದನು .
ಶ್ರಾವ್ಯಳಿಗೆ ಕೇವಲ ಗೆಳೆಯನಾಗಿ , ಇರುವುದಕ್ಕಿಂತ , ಅವಳಿಗೆ , ಈಗ ಪ್ರೇಮಿಯಾದರೆ. ಮುಂದೆ , ಭವಿಷ್ಯದಲ್ಲಿ.ಶ್ರಾವ್ಯಳನ್ನ, ಮದುವೆಯಾಗಿ , ಅವಳ ಗಂಡನಾಗಿ. ಒಂದು , ಶ್ರೀಮಂತ, ಕುಟುಂಬಕ್ಕೆ ಅಳಿಯನಾಗಬಹುದು.
ಹೇಗಾದರೂ , ಮಾಡಿ , ಶ್ರಾವ್ಯಳನ್ನ, ತನ್ನ ಪ್ರೀತಿಯ ಬಲೆಯ, ಒಳಗೇ ಬಿಳಿಸಿಕೊಳ್ಳಲೇಬೇಕು. ಆಗೊಂದು ವೇಳೆ, ಶ್ರಾವ್ಯ , ನನ್ನ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದೆ ಅದಲ್ಲಿ, ನನ್ನ ಮುಂದಿನ ಜೀವನ . ಸುಖಮಯವಾಗಿರುತ್ತದೆ , ಎಂದು ಕನಸು ಕಾಣುತ್ತಿದ್ದನು.
ಮುತ್ತಮ್ಮನನ್ನನ್ನು, ಹೇಗಾದರೂ, ನನ್ನಿಂದ ದೂರ ಮಾಡಬೇಕು.ಏನು ಮಾಡುವುದು ಎಂದು ರೋಹನ್ ಯೋಚಿಸುತ್ತಿದ್ದಾಗ. ಮುತ್ತಮ್ಮ ನಿಗೆ, ಜೀವನದಲ್ಲಿ ಒಂದು , ದೊಡ್ಡ ಸಮಸ್ಯೆ ಎದುರಾಯಿತು .
ಅದೇನೆಂದರೆ ,ಮುತ್ತಮ್ಮ ಳ ತಂದೆ , ಕ್ಯಾನ್ಸರ್ ರೋಗಿ ,ಕಾಯಿಲೆಯದಿಂದ ಬಳಲುತ್ತಿದ್ದರು. ಮುತ್ತಮ್ಮಳ ತಂದೆಯನ್ನ, ಮುತ್ತಮ್ಮಳ, ತಾಯಿ , ಊರಿನಲ್ಲಿ ಇದ್ದು ನೋಡಿಕೊಳ್ಳುತ್ತಿದ್ದರು. ಹೀಗಿರುವಾಗ , ಮುತ್ತಮ್ಮಳ ತಂದೆ , ಒಂದು ದಿನ ಮರಣ ಹೊಂದಿದರು .
ವಿಷಯ ತಿಳಿದ ಮುತ್ತಮ್ಮ ಊರಿಗೆ ನಡೆದಳು. ತಂದೆಯ ಎಲ್ಲಾ, ಕಾರ್ಯಗಳು ಮುಗಿದ ನಂತರ . ಮುತ್ತಮ್ಮಳ ತಾಯಿ, ಮುತ್ತಮ್ಮ ಳಿಗೆ , ನೀನು ಸಿಟಿಯಲ್ಲಿ ಕೆಲಸ ಮುಂದುವರೆಸುವುದು , ಬೇಡ.
ನಮ್ಮ ಊರಿನಲ್ಲಿಯೇ ಇದ್ದು ಚಿಕ್ಕದೊಂದು , ಯಾವುದಾದರೂ ಕೆಲಸವನ್ನ ಮಾಡು. ನನ್ನ ಒಬ್ಬಳನ್ನೆ ಬಿಟ್ಟು ಬೇರೆ ಊರಿಗೆ ಹೋಗಬೇಡ. ನಾನು , ಸಿಟಿಯಲ್ಲಿ ಬಂದು ಇರಲು , ಸಿಟಿಯ ವಾತಾವರಣ , ನನಗೆ ಹೊಂದಿಕೊಳ್ಳುವುದಿಲ್ಲ.
ಆದರಿಂದ ಎಲ್ಲಿಯು ಹೋಗದೆ . ನಮ್ಮ ಊರಿನಲ್ಲಿಯೇ , ಇದ್ದು , ಯಾವುದಾದರೂ , ಕೆಲಸ , ಹುಡುಕಿಕೊಂಡು , ನನ್ನ ಜೊತೆ ಇದ್ದು ಬಿಡು ಎಂದು ಹೇಳಿದರು . ಮುತ್ತಮ್ಮನಿಗೆ ತುಂಬಾ ಬೇಸರವಾಯಿತು.
ಹೀಗಿರುವಾಗ, ನಾನು ರೋಹನ್ ಬಿಟ್ಟು, ನನ್ನ ಹುಟ್ಟು ಊರಿನಲ್ಲಿ ಇರಲು ಹೇಗೆ ಸಾಧ್ಯ. ನನ್ನಿಂದ ರೋಹನ್ ಬಿಟ್ಟು, ದೂರ ಇರೊದಿಕ್ಕೆ ಆಗಲ್ಲವೇ. ಎಂದು ಚಿಂತಿಸುತ್ತಿದ್ದಳು.
ಮತ್ತು , ಈಗಾಗಲೇ , ತಂದೆಯನ್ನ ಕಳೆದುಕೊಂಡಿದ್ದೆನೆ, ತಾಯಿಯನ್ನಾದರೂ , ಚೆನ್ನಾಗಿ ನೋಡಿಕೊಳ್ಳಬೇಕು . ನನಗೆ ತಾಯಿ , ಬಿಟ್ಟರೇ ಬೇರೆ ಯಾರು ಇಲ್ಲ . ಅಮ್ಮನ , ಆಸೆಯಂತೆಯೇ ನಾನು ,
ಮುಂದೆ ಭವಿಷ್ಯ ದಲ್ಲಿ . ರೋಹನ್ ನನ್ನು, ಮದುವೆಯಾಗಿ , ಜೊತೆಯಲ್ಲಿ , ಇದ್ದೆ ಇರುತ್ತೆನೆ. ಅಲ್ಲವೇ. ಈಗ ಅಮ್ಮನಿಗಾಗಿ . ರೋಹನ್ , ಮತ್ತು ಸಿಟಿಯಲ್ಲಿ ಕೆಲಸ ಬಿಟ್ಟು .
ಎಲ್ಲವನ್ನು , ಸ್ವಲ್ಪ ದಿನದ ಮಟ್ಟಿಗೆ ದೂರ ಇಡೋಣ ಎಂದು , ಯೋಚಿಸಿ . ನಡೆದ ಎಲ್ಲಾ ವಿಷಯವನ್ನ , ರೋಹನ್ ಗೆ, ತಿಳಿಸಿ , ಕೆಲಸಕ್ಕೆ ರಾಜೀನಾಮೆ ಕೊಟ್ಟು , ರೋಹನ್ ಜೊತೆ , ವಾಸವಿದ್ದ ಮನೆಯನ್ನ ಖಾಲಿ ಮಾಡಿಕೊಂಡು ಹೋದಳು.
ಎಲ್ಲಾ ವಿಷಯ, ರೋಹನ್ ಗೆ ಸಾಧಕವಾಗೀಯೆ ಇತ್ತು . ಮುತ್ತಮ್ಮನಿಂದ , ಅಂತರ ಕಾಯ್ದುಕೊಳ್ಳಬೇಕು , ಮತ್ತು , ಅವಳಿಂದ ದೂರ ಆಗಿ . ಶ್ರಾವ್ಯ ಳ, ಜೊತೆ ಸೇರಿ , ಹೊಸದಾದ , ಪ್ರೇಮ ಗೀತೆಯನ್ನ ಹಾಡಬೇಕು .
ಮುತ್ತಮ್ಮ, ರೋಹನ್ ನ್ನ, ಬಿಟ್ಟು, ತನ್ನ ಹುಟ್ಟು ಊರಿಗೆ ಹೋದದ್ದು, ರೋಹನ್ ಗೆ ತುಂಬಾ ಸಂತಸವನ್ನ ಉಂಟು ಮಾಡಿತು. ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲು ಅನ್ನ. ಅನ್ನೋ ಹಾಗೆ.
ಮುತ್ತಮ್ಮ ನಿಂದ ಹೇಗಾದರೂ, ದೂರ ಆಗಬೇಕು.ಅಂದುಕೊಂಡಿದ್ದವನಿಗೆ, ಮುತ್ತಮ್ಮ ಳೇ, ಇವನನ್ನ ಬಿಟ್ಟು ದೂರ ಹೋದದ್ದು ಇವನಿಗೆ.ಖುಷಿಯೋ ಖುಷಿ.
ಸರಿ ಮುತ್ತಮ್ಮ, ರೂಂ, ಖಾಲಿ ಮಾಡಿ, ಹೋದ ಮೇಲೆ, ರೋಹನ್ ಗೆ ಪೋನ್ ಕರೆ ಮಾಡುತ್ತಿದ್ದಳು.ಆದರೆ ರೋಹನ್ ಅವಳಿಂದ ಅಂತರ ಕಾಯ್ದುಕೊಳ್ಳುತ್ತಿದ್ದ, ಪೋನ್ ಕರೆ , ಮತ್ತು ಸಂದೇಶಗಳಿಗೆ , ಸರಿಯಾಗಿ ಉತ್ತರಿಸುತ್ತಿರಲಿಲ್ಲ.
ಯಾವಾಗಲೂ , ಕಾರ್ಯನಿರತನಾಗಿರುವಂತೆ (ಬ್ಯುಸಿ) ತೋರಿಸಿಕೊಳ್ಳುತ್ತಿದ್ದ. ಮುತ್ತಮ್ಮ, ರೋಹನ್ ನಾ ಮೇಲಿನ, ಪ್ರೀತಿಯಿಂದ ಬೇಸರ ಮಾಡಿಕೊಳ್ಳುತ್ತಿರುಲಿಲ್ಲ.
ಶ್ರಾವ್ಯ , ನೋಡಲು , ಸುಂದರಿ. ಚೆನ್ನಾಗಿ,ಓದಿದ್ದಾಳೆ. ಮತ್ತು , ಹಣ , ಆಸ್ತಿ ಸಂಪತ್ತು ತುಂಬಿರುವ, ಶ್ರೀಮಂತ ಕುಟುಂಬಕ್ಕೆ ಸೇರಿದ ಹುಡುಗಿ . ಇಂತಹವಳನ್ನ, ಪ್ರೀತಿಸಿ , ಮದುವೆಯಾದರೆ , ಆರಾಮಾಗಿ , ಜೀವನ ಸೆಟ್ಲ್ ಆಗುತ್ತೆ .
ಶ್ರಾವ್ಯ ಹಾಗೇನು ಇಲ್ಲ . ರೋಹನ್, ಮತ್ತೆ ಯಾಕೆ ? ರೋಹನ್ ಮುಂದುವರೆದು, ಓ ಗೊತ್ತಾಯಿತು ಬಿಡಿ .
ಸ್ನೇಹ ಪ್ರೀತಿ ವಿಶ್ವಾಸ ಮುಂದೆ, ಬಿಡುವ, ಶ್ರೀಮಂತ ಅಂತ ಲೆಕ್ಕಾಚಾರ ಮಾಡೋಕೆ ಆಗುತ್ತಾ. ರೋಹನ್, ಬಾಯಲ್ಲಿ, ಲೆಕ್ಕಾಚಾರ ಮಾಡ್ತೀಲ್ಲ.
Your content goes here. Edit or remove this text inline or in the module Content settings. You can also style every aspect of this content in the module Design settings and even apply custom CSS to this text in the module Advanced settings.